ಕೆಎಸ್‌ಆರ್ ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಭೀಕರ ಅಪಘಾತ|ಉಡುಪಿ ಮೂಲದ ತಾಯಿ ಮಗು ಸೇರಿದಂತೆ ಡ್ರೈವರ್ ಸ್ಥಳದಲ್ಲೇ ಸಾವು!

ರಾಮನಗರ:ಕೆಎಸ್‌ಆರ್ ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಕನಕಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.

6 ತಿಂಗಳ ಮಗು ಸುಮಂತ್ ಸೇರಿದಂತೆ ಉಡುಪಿ ಮೂಲದ ಅಕ್ಷತಾ ಹಾಗೂ ಡ್ರೈವರ್ ಉಮೇಶ್ ಮೃತರು.ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ತೀವ್ರತೆಗೆ ಮಗು ಸುಮಂತ್ ನ
ಮುಖದ ಒಂದು ಭಾಗ ಬೇರ್ಪಟ್ಟಿದ್ದು,ರಸ್ತೆಯಲ್ಲಿ ತಾಯಿ-ಮಗು ಕೊನೆಯುಸಿರೆಳೆದಿದ್ದಾರೆ.ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು,ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave A Reply

Your email address will not be published.