ಮಸೀದಿಗಳು ಮಾರ್ಗಸೂಚಿ ಅನುಸರಿಸದಿದ್ದರೆ ಡಬ್ಬಲ್ ವ್ಯಾಲ್ಯೂಮ್‌ನಲ್ಲಿ ಹನುಮಾನ್ ಚಾಲಿಸಾ – ರಾಜ್ ಠಾಕ್ರೆ

ಪುಣೆ : ಧ್ವನಿವರ್ಧಕ ಬಳಕೆಯ ವಿರುದ್ದ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಮುಂದುವರಿಯಲಿದೆ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಮಸೀದಿಗಳು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಡಬಲ್ ವ್ಯಾಲ್ಯೂಮ್ ನಲ್ಲಿ ಹನುಮಾನ್ ಚಾಲೀಸಾ ನುಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು ವಿದ್ಯಾರ್ಥಿಗಳು ಹಾಗೂ ಅಸ್ವಸ್ಥರು ಧ್ವನಿವರ್ಧಕಗಳಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.

ರಾಜ್ ಠಾಕ್ರೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಮೇ 4 ರಂದು ಬೆಳಿಗ್ಗೆ ಮುಂಬೈ ಹಾಗೂ ಸುತ್ತಮುತ್ತಲಿನ ಅನೇಕ ಮಸೀದಿಗಳು ಆಝಾನ್ ವೇಳೆ ಧ್ವನಿವರ್ಧಕ ಸ್ವಿಚ್ ಆಫ್ ಮಾಡಿದ್ದವು ಎಂದು ಎನ್‌ಡಿಟಿವಿ ವರದಿ ಮಾಡಿದೆ.

Leave A Reply

Your email address will not be published.