ಪುತ್ತೂರು : ಬಾಲಕನನ್ನು ಕಾಡಿಗೆ ಕರೆದುಕೊಂಡು ಹೋಗಿ ಅಪರಿಚಿತ ವ್ಯಕ್ತಿಯಿಂದ ಅತ್ಯಾಚಾರ; ಪೊಲೀಸ್ ಠಾಣೆಯಲ್ಲಿ ತಂದೆಯಿಂದ ದೂರು ದಾಖಲು!!!

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಘಟನೆಯೊಂದು ಪುತ್ತೂರು ತಾಲೂಕಿನ ಕಾವು ಸೇತುವೆ ಬಳಿ ನಡೆದಿದೆ.

ಅಪ್ರಾಪ್ತ ಬಾಲಕನೊಬ್ಬ ತನ್ನ ಅಜ್ಜಿ ಜೊತೆ ಸೊಸೈಟಿಗೆ ತೆರಳಿ ಬರುತ್ತಿದ್ದ ವೇಳೆ, ಅಪರಿಚಿತ ವ್ಯಕ್ತಿಯೋರ್ವ ಬೈಕಿನಲ್ಲಿ ಬಂದು, ಅಜ್ಜಿ ಮನೆಗೆ ಬಿಡುತ್ತೇನೆ ಬಾ ಎಂದು ಹೇಳಿದ್ದು, ಬಾಲಕ ಬರುವುದಿಲ್ಲ ಎಂದು ಹೇಳಿದರೂ, ಬಾಲಕನ ತಂದೆಯ ಹೆಸರು ಹೇಳಿ ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿ ಒತ್ತಾಯ ಮಾಡಿದ್ದಾನೆ.

ಬಾಲಕ ಬೈಕ್ ನಲ್ಲಿ ಕುಳಿತುಕೊಂಡ ನಂತರ ವ್ಯಕ್ತಿಯು ಬೈಕ್ ಅನ್ನು ಈಶ್ವರಮಂಗಲ ಕಡೆಗೆ ಹೋಗಿ, ಕಾಡಿಗೆನೊಳಗೆ ಕರೆದುಕೊಂಡು ಬಾಲಕನ ಮೇಲೆ ಅತ್ಯಾಚಾರ ವೆಸಗಿ, ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಆರೋಪಿ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.

Leave A Reply

Your email address will not be published.