ಮನೆ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದ ತಂದೆ, ಅದೇ ದಿನ ರಾತ್ರಿ ಮಗನಿಗೆ ಕಚ್ಚಿದ ಇನ್ನೊಂದು ಹಾವು!!!

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಹಾವು ತನ್ನ ದ್ವೇಷ ತೀರಿಸಿಕೊಳ್ಳಲು ಹನ್ನೆರಡು ವರ್ಷ ಅಲ್ಲ ಕೇವಲ ಒಂದೇ ದಿನದೊಳಗೆ ತನ್ನ ಸೇಡನ್ನು ತೀರಿಸಿಕೊಂಡಿದೆ. ಹೌದು..ನಿಜ…ಈ ಘಟನೆ ನಡೆದಿರುವುದು ಮಧ್ಯಪ್ರದೇಶ ಸೆಹೋರ್ ನಲ್ಲಿ. ನಡೆದ ಘಟನೆ ಏನೆಂದರೆ…

ಕೂಲಿ ಕಾರ್ಮಿಕನಾದ ಕಿಶೋರ್ ತನ್ನ ಮನೆಯ ಸಮೀಪ ಅಡ್ಡಾಡುತ್ತಿದ್ದ ಹಾವನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿದ್ದ. ಆದರೆ ಅದೇ ರಾತ್ರಿ 2 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಮಗನ ಕಾಲಿಗೆ ಮತ್ತೊಂದು ಹಾವು ಬಂದು ಹಠಾತ್ತನೆ ಕಚ್ಚಿ ಹೋಗಿದೆ.

ಮಧ್ಯಪ್ರದೇಶದ ಬುದ್ದಿ ಜೋಶಿಪುರ ನಿವಾಸಿಯಾದ ಕಿಶೋರ್ ಲಾಲ್ ಎಂಬುವವರ ಮಗ ರೋಹಿತ್ (12) ಹಾವು ಕಚ್ಚಿ ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಇಂತಹ ವಿಚಿತ್ರ ಘಟನೆಯಿಂದ ಗ್ರಾಮಸ್ಥರು ಸರ್ಪ ದೋಷದಿಂದ ಹೀಗಾಗಿದೆ ಎನ್ನುತ್ತಿದ್ದಾರೆ.

ತಕ್ಷಣವೇ ಮಗನನ್ನು ಹೊಶಂಗಾಬಾದ್ ನ ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಸಹ ಬಾಲಕ ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾನೆ.

Leave A Reply

Your email address will not be published.