ಮದುವೆ ಮಂಟಪದಲ್ಲಿ ವಧುವಿನ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಜೊತೆ ಬ್ಯೂಟಿಷಿಯನ್ ಪರಾರಿ !!?

ಇನ್ನೇನು ಮದುವೆಗೆ ಕೆಲವೇ ನಿಮಿಷ ಇದೆ ಎನ್ನುವಷ್ಟರಲ್ಲಿ ಕೋಣೆಗೆ ಬಂದ ವಧುವಿಗೆ ಶಾಕ್ ಕಾದಿತ್ತು. ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕದ್ದು ಪರಾರಿಯಾಗಿದ್ದು, ಆ ಆರೋಪ ವಧುವಿನ ಅಲಂಕಾರಕ್ಕೆ ಬಂದಿದ್ದ ಬ್ಯೂಟಿಷಿಯನ್ ಮೇಲೆರಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

27 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಪೂರ್ಣಿಮಾ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಮಹಾಲಕ್ಷ್ಮಿ ಮಂಟಪದಲ್ಲಿ ಮಂಗಳಸೂತ್ರ ಧಾರಣೆಗಾಗಿ ಕೊಠಡಿಯಿಂದ ಹೊರಬಂದಿದ್ದರು. ಈ ವೇಳೆ ವಧುವಿನ ಕೊಠಡಿಯಲ್ಲಿದ್ದ 102 ಗ್ರಾಮ್ ತೂಕದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಶಾಸ್ತ್ರದ ಕೆಲಸಗಳಿಗಾಗಿ ವಧು ಕೋಣೆಯಿಂದ ಹೊರಬಂದಿದ್ದಾರೆ. ಈ ಸಮಯದಲ್ಲಿ ಬ್ಯೂಟಿಶಿಯನ್ ಮಾತ್ರ ಅಲ್ಲಿದ್ದರು ಎಂಬುದಾಗಿ ಹೇಳಿದ್ದಾರೆ.

ಆಭರಣಗಳನ್ನು ಧರಿಸಲು ಪೂರ್ಣಿಮಾ ತನ್ನ ಕೋಣೆಗೆ ತೆರಳಿದಾಗ ಅಲ್ಲಿ ಆಭರಣ ಕಾಣೆಯಾಗಿತ್ತು. ಕನಕಪುರ ರಸ್ತೆಯ ರಂಗನಾಥ ಲೇಔಟ್ ನಿವಾಸಿ ಪೂರ್ಣಿಮಾ ಅವರಿಗೆ ಭಾವೀ ಪತಿ ವಿನೋದ್ ಕುಮಾರ್ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈ ಕಳ್ಳತನ ಬ್ಯೂಟಿಷಿಯನ್ ಅವರೆ ಮಾಡಿದ್ದಾರೆ ಎಂಬುದನ್ನು ಹೇಳಲಾಗುವುದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಬ್ಯೂಟಿಷಿಯನ್ ಅವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.