ಬರೆಪ್ಪಾಡಿ ದಾಮೋದರ ಗೌಡರ ಮೃತದೇಹ ಟ್ಯಾಂಕಿಯಲ್ಲಿ ಪತ್ತೆ

ಕುದ್ಮಾರು : ಆಕಸ್ಮಿಕವಾಗಿ ಟ್ಯಾಂಕಿಗೆ ಬಿದ್ದು ವ್ಯಕ್ತಿ ಸಾವು

ಸವಣೂರು : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಸವಣೂರಿನ ಬರೆಪ್ಪಾಡಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಎ.13ರಂದು ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ.

ಬರೆಪ್ಪಾಡಿ ದಾಮೋದರ ಗೌಡ (52 ವ.) ಎಂಬವರ ಮೃತದೇಹ ಮನೆಯ ಹತ್ತಿರದ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ.

ದಾಮೋದರ ಗೌಡ ಅವರ ನೂತನ ಮನೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು,ಕಾಮಗಾರಿಗಾಗಿ ನೀರಿನ ಮಟ್ಟವನ್ನು ನೋಡುವ ಸಲುವಾಗಿ ಟ್ಯಾಂಕ್ ಪರಿಶೀಲನೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ ಹಾಗೂ ಓರ್ವ ಪುತ್ರ ,ಪುತ್ರಿಯನ್ನು ಅಗಲಿದ್ದಾರೆ.

ಈ ಕುರಿತು ಮೃತರ ಸಹೋದರ ವಿಠಲ ಗೌಡ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಳ್ಳಾರೆ ಠಾಣಾ ಎಸೈ ರುಕ್ಮ ನಾಯ್ಕ ಮತ್ತು ಸಿಬಂದಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.