ಬಂಟ್ವಾಳ : ಮನೆಗೆ ಸಿಡಿಲು ಬಡಿದು, ಮನೆಗೆ ತೀವ್ರ ಹಾನಿ- ಮನೆಮಂದಿಗೆ ಗಾಯ

ಬಂಟ್ವಾಳ: ಮನೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಜಯಂತಿ ಎಂಬುವವರ ಮನೆಯಲ್ಲಿ ನಡೆದಿದೆ.

ಶಿಲ್ಪ (21), ಜಯಂತಿ (38), ರಾಜೇಶ್ ನಾಯ್ಕ (44), ಲಿಖಿತ್ ರಾಜ್ (16) ಎಂಬುವವರು ಗಾಯಗೊಂಡಿದ್ದು ಮನೆಗೂ ಹಾನಿಯಾಗಿದೆ.

ಸ್ಥಳೀಯ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಗಾಯಾಳುಗಳನ್ನು ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಮಾಹಿತಿ ನೀಡಿದೆ.

Leave A Reply

Your email address will not be published.