ಸಿಡಿಲು ಬಡಿದು ಮನೆಗೆ ತೀವ್ರ ಹಾನಿ|ಮನೆಯಲ್ಲಿದ್ದ ಇಬ್ಬರಿಗೆ ಗಾಯ

ಬಂಟ್ವಾಳ: ತಾಲೂಕಿನ ಪೆರಾಜೆಯಲ್ಲಿ ಅಕೇಶಿಯ ಮರಕ್ಕೆ ಸಿಡಿಲು ಬಡಿದು ಮನೆಗೆ ತೀವ್ರ ಹಾನಿಯಾಗಿ ಮನೆಯೊಳಗಿದ್ದ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ.

ಪೆರಾಜೆ ಗ್ರಾಮದ ಸಾದಿಕುಕ್ಕು ನಿವಾಸಿ ದಿ.ಮೋನಪ್ಪ ನಾಯ್ಕ ಅವರ ಪತ್ನಿ,ಗೀತಾ ಮೋನಪ್ಪ ನಾಯ್ಕ ಅವರ ಮನೆಗೆ ಸಿಡಲು ಬಡಿದಿದೆ.ಮನೆಗೆ ತೀವ್ರ ಹಾನಿಯಾಗಿದ್ದಲ್ಲದೆ, ಮನೆಯಲ್ಲಿ ಇದ್ದ ಗೀತಾ ಅವರ ಮಕ್ಕಳಾದ ಜೀವನ್ ಮತ್ತು ಸಚಿನ್ ಅವರಿಗೆ
ಗಾಯವಾಗಿದೆ.

ಮನೆಯ ಹತ್ತಿರ ವಿದ್ದ ಅಕೇಶಿಯ ಮರ ಸಂಪೂರ್ಣ ಭಸ್ಮ
ವಾಗಿದ್ದು,ಜೀವನ್ ಅವರ ಮುಖಕ್ಕೆ ಗಾಯವಾದರೆ, ಸಚಿನ್ ಅವರಿಗೆ ಸಿಡಿಲು ಶಾಕ್ ಆಗಿದೆ ಎಂದು ಮನೆಯವರು ತಿಳಿಸಿದ್ದಾರೆ.ಮನೆಯ ವಿದ್ಯುತ್ ಪೂರೈಕೆ ಮಾಡುವ ತಂತಿಗಳು ಸಿಡಿಲಿನ ತೀವ್ರತೆ ಗೆ ಭಸ್ಮವಾಗಿ ಹೋಗಿದೆ.

ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಪೆರಾಜೆ ಪಿಡಿಒ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.