ಬೆಳ್ತಂಗಡಿ:ಮಾನಸಿಕ ಅಸ್ವಸ್ತರಾಗಿರುವ ಶಿಶಿಲದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ: ಮಾನಸಿಕ ಅಸ್ವಸ್ತರಾಗಿರುವ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಶಿಶಿಲದಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಆನಂದ ಎಂದು ಗುರುತಿಸಲಾಗಿದ್ದು,ಇವರು ಶಿಶಿಲದ ಚಂದ್ರಶೇಖರ ಕೋಟೆಬಾಗಿಲು ಎನ್ನುವವರ ಮನೆಯಿಂದ ಇಂದು ಬೆಳಿಗ್ಗೆ 4:30ಗೆ ಹೊರಟು ಹೋಗಿದ್ದಾರೆ.ಇವರು ಶಿಶಿಲದಿಂದ-ಶಿಬಾಜೆ ಹೋಗುವ ಮಾರ್ಗದಿಂದ
ಸಂಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಒಬ್ಬ ಮಾನಸಿಕ ಅಸ್ವಸ್ತರಾಗಿರುತ್ತಾರೆ ಎಂದು ಮನೆಯವರು ತಿಳಿಸಿದ್ದಾರೆ. ಇವರು ಎಲ್ಲಿಯಾದರೂ ಸಿಕ್ಕಿದ್ದಲ್ಲಿ ಸಂಪರ್ಕಿಸಬೇಕಾಗಿ ಮನೆಯವರು ತಿಳಿಸಿದ್ದಾರೆ – 87629 28090.

9483139849

Leave A Reply

Your email address will not be published.