ಉಡುಪಿ ಮೂಲದ ಕುಖ್ಯಾತರಿಬ್ಬರ ಮೇಲೆ ಪೊಲೀಸ್ ಫೈರಿಂಗ್!! ಬೆಂಗಳೂರು ಪೊಲೀಸರ ಮೇಲೆ ಚೂರಿ ಇರಿತಕ್ಕೆ ಯತ್ನಿಸಿದಾಗ ನಡೆದ ಘಟನೆ

ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರನ್ನು ಬಂಧಿಸಿದ್ದಾರೆ. ಪಿಎಸ್ ಐ ಉಮೇಶ್ ಅವರ ಎದೆಗೆ ಡೆಡ್ಲಿ ರಾಬರ್ಸ್ ಚಾಕುವುನಿಂದ ಇರಿದಿದ್ದರು.

ಕಳೆದ ಮಾರ್ಚ್ 26 ರಂದು ಉಡುಪಿಯ ಮಣಿಪಾಲ ಮೂಲದ ದರೋಡೆಕೋರರಾದ ಆಶಿಕ್ ಮತ್ತು ಇಸಾಕ್, ಬೆಂಗಳೂರು ಮೂಲದ ವ್ಯಕ್ತಿಯ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕೊತ್ತನೂರು ಠಾಣೆಯಲ್ಲಿ ರಾಬರಿ ಕೇಸ್ ದಾಖಲಿಸಿದ್ದ.

ದೂರನ್ನು ದಾಖಲಿಸಿಕೊಂಡ‌ ಕೊತ್ತನೂರು ಪೊಲೀಸರು ಸಂಪಿಗೆ ಹಳ್ಳಿ ಉಪವಿಭಾಗ ಎಸಿಪಿ ರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಆಶಿಕ್ ಮತ್ತು ಇಸಾಕ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದರು. ಸಂಪಿಗೆಹಳ್ಳಿ ಲಿಮಿಟ್ಸ್ ಶಿವರಾಮ ಕಾರಂತ ಬಡಾವಣೆಯ ಕ್ಲಬ್ ಬಳಿ ಶೂಟೌಟ್ ಮಾಡಿ ಬಂಧಿಸಲಾಗಿದೆ.

ಈ ಪ್ರಕರಣದ ಆರೋಪಿಗಳಾದ ಉಡುಪಿ ಮೂಲದ ಆಶೀಕ್, ಇಸಾಕ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಗಾಯಾಳು ಪಿಎಸ್ ಐ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡೇಟು ತಿಂದ ಆರೋಪಿಗಳನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.