ವಿಟ್ಲ : ಪರಾರಿಯಾಗಿದ್ದ ಅಕ್ರಮ ದನ ಸಾಗಾಟದ ಆರೋಪಿ ಬಂಧನ !

ವಿಟ್ಲ : ದನ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪೆರುವಾಯಿ ನಿವಾಸಿ ಅಬ್ದುಲ್ ರಝಾಕ್ ಯಾನೆ ಪುತ್ತು ( 47) ಬಂಧಿತ ಆರೋಪಿ.

ಕಪ್ಪು ಬಣ್ಣದ 1 ದನ ಹಾಗೂ ಅದರ ಜೊತೆಗಿದ್ದ ಕರುವನ್ನು ಹತ್ಯೆಗಾಗಿ ಹೈನುಗಾರನಿಂದ ಖರೀದಿಸಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯೋರ್ವರಾದ ಸತೀಶ ಎಂಬುವರು ದಾರಿ ಮಧ್ಯೆ ತಡೆಯಲು ಮುಂದಾದಾಗ, ವಾಹನ ನಿಲ್ಲಿಸಿ ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಇಳಿಸಿ ಆರೋಪಿ ವಾಹನದೊಂದಿಗೆ ಪರಾರಿಯಾಗಿದ್ದ.

Leave A Reply

Your email address will not be published.