ತಮ್ಮನಿಂದಲೇ ಒಡಹುಟ್ಟಿದ ಅಣ್ಣನ ಕೊಲೆ!! ಜಗಳ ತಾರಕಕ್ಕೇರಿ ಇರಿದು ಕೊಂದ ತಮ್ಮ ಪೊಲೀಸರಿಗೆ ಶರಣು

ಸಹೋದರರಿಬ್ಬರ ನಡುವೆ ನಡೆದ ಜಗಳವು ತಾರಕಕ್ಕೇರಿ ತಮ್ಮನೇ ಅಣ್ಣನನ್ನು ಇರಿದು ಕೊಂದ ಘಟನೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಲ ಎಂಬಲ್ಲಿ ಮಾರ್ಚ್ 21 ರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಥೋಮಸ್ ಡಿಸೋಜ(45) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ತಮ್ಮ ರಾಜೇಶ್(37) ಎನ್ನಲಾಗಿದೆ.

ಇಬ್ಬರೂ ರಾತ್ರಿ ವಿನಃ ಕಾರಣ ಜಗಳ ನಡೆಸಿಕೊಂಡಿದ್ದು, ಮಾತಿಗೆ ಮಾತು ಬೆಳೆದು ಕತ್ತಿ ಬೀಸುವ ಮಟ್ಟಕ್ಕೆ ತಲುಪಿದೆ. ಈ ವೇಳೆ ಬಿಡಿಸಲು ಬಂದ ಥೋಮಸ್ ಸಂಬಂಧಿಕರೊಬ್ಬರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯ ನಡೆಸಿದ ಆರೋಪಿ ಬದಿಯಡ್ಕ ಪೊಲೀಸರಿಗೆ ಶರಣಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.