ಬೆಂಗಳೂರು – ಮಂಗಳೂರು ನಡುವಿನ ರೈಲು ಸಂಚಾರ ರದ್ದು

ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ನಿರ್ವಹಿಸಲು ಗುರುವಾರದಿಂದಲೇ 18 ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ( ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು, ಮಂಗಳೂರು ಸೆಂಟ್ರಲ್ – ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು ( 06487/06486)
ಮಾ.17 ರಿಂದ 20 ರವರೆಗೆ ಇಲ್ಲ‌.

ಪುಣೆ – ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲು ( 11097/11098) ಮಾ.19 ರಂದು ಮತ್ತು 21 ರಂದು ರದ್ದಾಗಿದೆ. ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ( 16515/16516) ಮಾ.18 ಮತ್ತು 19 ರಂದು ಇರುವುದಿಲ್ಲ.

ಯಶವಂತಪುರ – ಮಂಗಳೂರು ಎಕ್ಸ್‌ಪ್ರೆಸ್‌ ರೈಲು ( 16575/16576) ಮಾ.17 ಮತ್ತು 18 ರಂದು ಇರುವುದಿಲ್ಲ. ಯಶವಂತಪುರ – ಮಂಗಳೂರು ಎಕ್ಸ್‌ಪ್ರೆಸ್‌ ( 16539/16540) ರೈಲು ಮಾ.19 ಮತ್ತು 20 ರಂದು ಸಂಚರಿಸುವುದಿಲ್ಲ.

ಬೆಂಗಳೂರು – ಕಾರವಾರ ಎಕ್ಸ್ ಪ್ರೆಸ್ ( 16595/16596), ಯಶವಂತಪುರ – ಕಣ್ಣೂರು ಎಕ್ಸ್‌ಪ್ರೆಸ್‌ ( 16511/16511) , ಕೆ ಎಸ್ ಆರ್ ಬೆಂಗಳೂರು- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ( 16585/16586) ರೈಲುಗಳ ಸಂಚಾರ ಮಾ.19 ಮತ್ತು 20 ರಂದು ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Leave A Reply

Your email address will not be published.