ಗಡಿಪಾರು ಸುದ್ದಿ ಸುಳ್ಳು ಎಂದ ನಟ ಚೇತನ್ !

ಬೆಂಗಳೂರು : ನಟ, ಸಾಮಾಜಿಕ ಕಾರ್ಯಕರ್ತನನ್ನು ಇತ್ತೀಚೆಗೆ ಗಡಿಪಾರು ಮಾಡಲಾಗುತ್ತಿದೆ ಎಂಬ ವರದಿಗಳು ಬಂದಿತ್ತು. ಆದರೆ ಈ ಮಾಹಿತಿಯ ಬಗ್ಗೆ ಅಲ್ಲಗೆಳೆದಿರುವ ಚೇತನ್, ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಇದು ಅತಿರೇಕದ ಸುದ್ದಿಗಳೆಂದು ಗಡಿಪಾರು ಸಂಬಂಧ ರವಿವಾರ ಪ್ರತಿಕ್ರಿಯಿಸಿದ್ದಾರೆ.

ಈ ರೀತಿಯ ಸರಕಾರಿ ಬೆಂಬಲಿತ ದಾಳಿಗಳು ನಮ್ಮ‌ ಸತ್ಯ ಮತ್ತು ಸಮಾನತೆಯ ಪರದ ಧ್ವನಿಗಳು ಹೆಚ್ಚಾಗುತ್ತಿರುವುದನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ನಾನು ನನ್ನ ಬಂಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯವಾಗಿದ್ದೇನೆ. ಹಾಗೂ ನನಗಾಗಿ ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಚೇತನ್ ಹೇಳಿದ್ದಾರೆ.

Leave A Reply

Your email address will not be published.