ಮಂಗಳೂರು : ರಸ್ತೆ ಅಪಘಾತವೊಂದರಲ್ಲಿ ವಿದ್ಯಾರ್ಥಿ ದಾರುಣ ಸಾವು!

ಮಂಗಳೂರು : ನಗರ ಹೊರವಲಯದ ಶಕ್ತಿನಗರ ಪದವು ಎಂಬಲ್ಲಿ ಸೋಮವಾರ ಅಪರಾಹ್ನ ರಸ್ತೆ ಅಪಘಾತವೊಂದರಲ್ಲಿ ವಿದ್ಯಾರ್ಥಿ ಪ್ರಜ್ವಲ್ ಸಾಲ್ಯಾನ್ ( 18) ಮೃತಪಟ್ಟಿದ್ದಾನೆ.

ಬೈಕ್ ಗೆ ಡಿಕ್ಕಿ ಹೊಡೆದ ಬಸ್ ಬಳಿಕ ಪ್ರಜ್ವಲ್ ರ ದೇಹದ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಶಕ್ತಿನಗರ ರುದ್ರಭೂಮಿ ಸಮೀಪದ ನಿವಾಸಿಯಾಗಿರುವ ಪ್ರಜ್ವಲ್ ಸಾಲ್ಯಾನ್ ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ.

Leave A Reply

Your email address will not be published.