ಸುಬ್ರಹ್ಮಣ್ಯ : ಓಮ್ನಿ ಪಲ್ಟಿ, ಕಬ್ಬಿಣದ ಸರಳು ನುಗ್ಗಿ ಒಂದು ವರ್ಷದ ಮಗು ಸಾವು

ಸುಳ್ಯ : ಗುತ್ತಿಗಾರು -ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಕೆದಂಬಾಡಿ ಯತೀಶ್ ಎಂಬವರ ಮಗು ಸರಿತ್ ಮೃತ ಮಗು. ಇವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ಪಲ್ಟಿಯಾಗಿದ್ದು ಈ ವೇಳೆ ಕಬ್ಬಿಣದ ಸರಳೊಂದು ಮಗುವಿನ ಕುತ್ತಿಗೆಗೆ ನುಗ್ಗಿ ತೀವ್ರ ಜಖಂಗೊಂಡಿದ್ದು, ಮಗು ಕೊನೆಯುಸಿರೆಳೆಯಿತು.

ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದ್ದು, ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.