ಪಬ್ ನಲ್ಲಿ ಕನ್ನಡ ಹಾಡು ಹಾಕುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿದ ಡಿಜೆ ಯುವಕ |ಕನ್ನಡ ಮಣ್ಣಲ್ಲೇ ಕನ್ನಡಕ್ಕೆ ಅವಮಾನ

ಬೆಂಗಳೂರು:ಕನ್ನಡ ಭಾಷೆಯನ್ನು ಉಳಿಸಬೇಕಾದ ಕನ್ನಡಿಗರೇ ಕನ್ನಡದ ಬೆಲೆಯನ್ನು ಅರಿಯದ ಸ್ಥಿತಿಗೆ ತಲುಪಿದ್ದಾರೆ.ಹೌದು. ಪಬ್​ ಒಂದರಲ್ಲಿ ಕನ್ನಡಿಗರಲ್ಲಿಯೇ ‘ಕನ್ನಡ ಹಾಡು’ ಹಾಕಿ ಎಂದಿದ್ದಕ್ಕೆ ಹಲ್ಲೆ ಮಾಡಲಾದ ಘಟನೆ ನಡೆದಿದೆ.

ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್ ಪಬ್​ನಲ್ಲಿ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಪಬ್​ನ ಡಿಜೆ ​ ಯುವಕ-ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಪಬ್ ಡಿಜೆ ಸಿದ್ಧಾರ್ಥ್@ಅಪೋಸಿಟ್​, ಸಮಿತಾ, ಆಕೆಯ ಸಹೋದರ ನಂದಕಿಶೋರ್​ ಮೇಲೆ ಹಲ್ಲೆ ನಡೆಸಿದ್ದಾನೆ.

ಸಮಿತಾ ನಿನ್ನೆ ರಾತ್ರಿ ಬರ್ತ್​ ಡೇ ಆಚರಿಸಲು ಪಬ್​ಗೆ 15 ಮಂದಿ ಸ್ನೇಹಿತರ ಜೊತೆ ರಾತ್ರಿ 9ರ ಸುಮಾರಿಗೆ ಹೋಗಿದ್ದಾರೆ.ಕನ್ನಡ ಹಾಡು ಹಾಕುವಂತೆ ಡಿಜೆ ಬಳಿ ನಾಲ್ಕೈದು ಬಾರಿ ಕೇಳಿದ್ದಾರೆ. ಡಿಜೆಗಳು ತೆಲುಗು, ತಮಿಳು, ಹಿಂದಿ ಹಾಡು ಹಾಕಿದ್ದು, ಕನ್ನಡ ಹಾಡು ಹಾಕಲ್ಲ.ಬೇಕಿದ್ರೆ ಹೊರಗಡೆ ಹೋಗಿ ಎಂದು ಸಮಿತಾ, ನಂದಕಿಶೋರ್​ ಕಾಲರ್ ಹಿಡಿದು ಡಿಜೆ ಅವಾಜ್ ಹಾಕಿದ್ದಾನೆ. ಈ ವೇಳೆ ಸಮಿತಾ ಮತ್ತು ಡಿಜೆ ಟೀಮ್ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಡಿ ಹಲ್ಲೆ ಮಾಡಿದ್ದಾರೆಂದು ಸಮಿತಾ ಸ್ನೇಹಿತರ ಆರೋಪ ಮಾಡುತ್ತಿದ್ದಾರೆ.

ಕೋರಮಂಗಲ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಕನ್ನಡ ಹಾಡು ಕೇಳಿದ್ದಕ್ಕೆ ಕನ್ನಡ ನೆಲದಲ್ಲೇ ಹಲ್ಲೆಯಾಗಿರುವುದು ನಿಜಕ್ಕೂ ಅವಮಾನವೇ ಆಗಿದೆ.

Leave A Reply

Your email address will not be published.