ಗಂಡನ ಸಾವಿನ ಬಳಿಕ ಒಬ್ಬಂಟಿಯಾದ ಪತ್ನಿ| ಆಸರೆಯಿಲ್ಲದ ಆಕೆಯನ್ನು ಮದುವೆಯಾಗುವ ಮೂಲಕ ಬಾಳು ಬೆಳಗಿಸಿದ ತಮ್ಮ

ಬೆಳಗಾವಿ:ಕೊರೋನ ಸೋಂಕಿಗೆ ತುತ್ತಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಣ್ಣನ ಸಾವಿನ ಬಳಿಕ ವಿಧವೆಯಾಗಿದ್ದ ಅತ್ತಿಗೆಯ ಕತ್ತಲ ಬಾಳಿಗೆ ಮದುವೆಯಾಗುವ ಮೂಲಕ ತಮ್ಮ ಆಸರೆಯಾದ ಘಟನೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯದಲ್ಲಿ ನಡೆದಿದೆ.

ಕಳೆದ ವರ್ಷ ಆಗಸ್ಟ್​ನಲ್ಲಿ 31 ವರ್ಷದ ನೀಲೇಶ್​ ಸೇಠ್​ ಬಲಿಯಾಗಿದ್ದು,ಗಂಡನನ್ನು ಕಳೆದುಕೊಂಡು 23 ವರ್ಷದ ಪೂನಂ ಹಾಗೂ ಆಕೆಯ 19 ತಿಂಗಳ ಮಗು ಆಸರೆಯಿಲ್ಲದಂತಾಗಿದ್ದರು.ಇದೀಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಲೇಶ್​ ಸಹೋದರ ಸಮಾಧಾನ್​ ಪೂನಂ ಕೈ ಹಿಡಿಯುವ ಮೂಲಕ ಅವರ ಬದುಕಿಗೆ ಆಸೆಯಾಗಿದ್ದಾರೆ.

ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಪೂನಂ‌ ಹಾಗೂ ಸಮಾಧಾನ್​ಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಅಲ್ಲದೆ, ಸಮಾಧಾನ್​ ನಡೆಗೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದೆ.ಆಕೆಯ ಒಬ್ಬಂಟಿ ತನ ನೋಡಲಾರದೆ ಆಕೆಯ ಬಾಳಿಗೆ ಆಸರೆಯಾಗಿ ನಿಂತಿದ್ದಾನೆ ತಮ್ಮ.

Leave A Reply

Your email address will not be published.