ಮಕರ ಸಂಕ್ರಾಂತಿಯ ದಿನ ಊರಿಗೆ ಬಂದಿದ್ದ ಮಹಿಳೆಯ ಕೊಲೆಗೆ ಯತ್ನಿಸಿದ ಮಾಜಿ ಪ್ರಿಯಕರ!! ಅನೈತಿಕ ಸಂಬಂಧ ತೊರೆದು ಗಂಡನೊಂದಿಗೆ ತೆರಳಿದ್ದರಿಂದ ಕೆರಳಿದ ಪ್ರಿಯಕರ ಬಿಯರ್ ಬಾಟಲ್ ನಿಂದ ಚುಚ್ಚಿದ
ಹಬ್ಬದ ದಿನ ಗ್ರಾಮದ ದೇವಾಲಯಕ್ಕೆ ತನ್ನ ಮಗಳ ಜೊತೆ ಬಂದಿದ್ದ ಮಹಿಳೆಯೋರ್ವಳಿಗೆ ಆಕೆಯ ಮಾಜಿ ಪ್ರಿಯಕರ ಕಾಡಿದ್ದು, ಬಿಯರ್ ಬಾಟಲ್ ನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಎಂಬಲ್ಲಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ವೆಂಕಪ್ಪ ಎಂದು ಗುರುತಿಸಲಾಗಿದೆ. ಘಟನೆ ವಿವರ: ಮದುವೆಯಾಗಿ ಮೂರು ಮಕ್ಕಳಿರುವ ದಾಳಿಗೊಳಗಾದ ಮಹಿಳೆಗೆ ವೆಂಕಪ್ಪನೊಂದಿಗೆ ಅನೈತಿಕ ಸಂಬಂಧವಿದ್ದು,ಮುಂದಕ್ಕೆ ಯಾವುದೇ ಸಂಬಂಧ ಬೇಡವೆಂದು ಕೆಲ ಸಮಯದಿಂದ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಮಕರ ಸಂಕ್ರಾಂತಿಯ ದಿನ ಊರಿಗೆ ಬಂದಿದ್ದ …