ಕಡಲ ಕಿನಾರೆಯಲ್ಲಿ ಕಳವಳ | ದಕ್ಷಿಣ ಕನ್ನಡ ಸೇರಿ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಕೋರೋನಾತಂಕ

ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದ್ದು, ಬೆಂಗಳೂರಿನಲ್ಲಿ ಇಂದು ಹೊಸದಾಗಿ 18,374 ಜನರಿಗೆ ಸೋಂಕು ತಗಲಿದ್ದು, ಮೂವರು ಮೃತಪಟ್ಟಿದ್ದಾರೆ. 1132 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 90,893 ಸಕ್ರಿಯ ಪ್ರಕರಣಗಳು ಇವೆ.ದಕ್ಷಿಣ ಕನ್ನಡದಲ್ಲಿ 625 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ.

ಜಿಲ್ಲಾವಾರು ಮಾಹಿತಿ ಈ ರೀತಿ ಇದೆ.

ದಕ್ಷಿಣಕನ್ನಡ 625, ದಾವಣಗೆರೆ 92, ಧಾರವಾಡ 399, ಹಾಸನ 490, ಕಲಬುರ್ಗಿ 346,ಬಳ್ಳಾರಿ 185, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 390, ಬೀದರ್ 97, ಚಾಮರಾಜನಗರ 176, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 90, ಕೋಲಾರ 293, ಮಂಡ್ಯ 406, ಮೈಸೂರು 695, ರಾಯಚೂರು 122, ರಾಮನಗರ 112, ಶಿವಮೊಗ್ಗ 212, ತುಮಕೂರು 547, ಉಡುಪಿ 379, ಉತ್ತರಕನ್ನಡ 250 ಹೊಸ ಪ್ರಕರಣ ವರದಿಯಾಗಿವೆ.

ಬೆಳಗಾವಿ 1, ಬೆಂಗಳೂರು ನಗರ 3, ಕಲಬುರ್ಗಿ 1, ಮೈಸೂರು 1, ತುಮಕೂರು 1, ವಿಜಯಪುರ 1 ಸೇರಿ ರಾಜ್ಯದಲ್ಲಿ 8 ಜನ ಸೋಂಕಿತರು ಮೃತಪಟ್ಟಿದ್ದಾರೆ.

Leave A Reply

Your email address will not be published.