ಕಾನಾವು ಜಾಲು ತರವಾಡಿನಲ್ಲಿ ರುದ್ರಚಾಮುಂಡಿ ಶಿರಾಡಿ ದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ

ಸುಳ್ಯ : ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕಾನಾವುಜಾಲು ತರವಾಡಿನಲ್ಲಿ ಪಿಲಿಭೂತ, ಧರ್ಮದೈವ ರುದ್ರಚಾಮುಂಡಿ, ಶಿರಾಡಿ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜ.7 ಮತ್ತು 8 ರಂದು ನಡೆಯಿತು.

600ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಾನಾವುಜಾಲು ಕುಟುಂಬದ ಸಾನಿಧ್ಯ ಅಪೂರ್ವ ರೀತಿಯಲ್ಲಿ ಪುನರ್ ನಿರ್ಮಾಣಗೊಂಡು ವರ್ಷದ ಹಿಂದೆ ಬ್ರಹ್ಮಕಲಶ ನಡೆದು ಇದೀಗ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಕಾನಾವುಜಾಲು ತರವಾಡು ಮನೆಯ ಯಶವಂತ ಕಾನಾವುಜಾಲು, ಯತೀಶ್ ಕಾನಾವುಜಾಲು, ಸೋಮೇಶ ಕಾನಾವುಜಾಲು, ಹರಿಶ್ಚಂದ್ರ ಕಾನಾವುಜಾಲು, ಹೊನ್ನಪ್ಪ ಕಾನಾವುಜಾಲು, ಅಚ್ಚುತ ಕಾನಾವುಜಾಲು, ಗೌತಮ್ ಕೇಶವ ಕಾನಾವುಜಾಲು- ಕುಶಾಲನಗರ, ದಯಾನಂದ ಗೌಡ ಕಾನಾವುಜಾಲು, ಪದ್ಮನಾಭ ಗೌಡ ಕಾನಾವುಜಾಲು, ಹೊನ್ನಪ್ಪ ಗೌಡ ಕಾನಾವುಜಾಲು, ಪುಟ್ಟಣ್ಣ ಗೌಡ ಕಾನಾವುಜಾಲು, ಹರಿಶ್ಚಂದ್ರ ಕಾನಾವುಜಾಲು, ಮೋನಪ್ಪ ಗೌಡ ಕಾರ್ಕಳ, ಬಾಲಕೃಷ್ಣ ಗೌಡ ಕಾರ್ಕಳ, ರಾಧಾಕೃಷ್ಣ ಗೌಡ ಕಾನಾವುಜಾಲು, ಚಂದ್ರಶೇಖರ ಕಾನಾವುಜಾಲು, ಕುಂಞಪ್ಪ ಗೌಡ ಪಲ್ಲೋಡಿ, ಮೋನಪ್ಪ ಗೌಡ ಪಲ್ಲೋಡಿ, ರಾಮಣ್ಣ ಗೌಡ ಪಲ್ಲೋಡಿ, ಮುತ್ತಪ್ಪ ಗೌಡ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೆರೆಕ್ಕೋಡಿ, ಆನಂದ ಗೌಡ ಕೆರೆಕ್ಕೋಡಿ, ಮಾಯಿಲಪ್ಪ ಕೆರೆಕ್ಕೋಡಿ, ಸುಂದರ ಗೌಡ ಪಟ್ಟೆ, ನಾರಾಯಣ ಗೌಡ ಪಟ್ಟೆ, ಬಾಲಪ್ಪ ಗೌಡ ಪಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.