ಈ ದೇವಸ್ಥಾನದ ಹಣ್ಣುಕಾಯಿ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜು!! | ಅಷ್ಟಕ್ಕೂ ಆ ಹಣ್ಣುಕಾಯಿ ಪ್ರಸಾದದ ವಿಶೇಷತೆಯೇನು??

ದೇವಸ್ಥಾನದ ದೇವರ ಪ್ರಸಾದಕ್ಕೆ ತುಂಬಾನೇ ಮೌಲ್ಯವಿದೆ. ಅದು ತುಂಬಾನೇ ಪವಿತ್ರವಾದದ್ದು. ಆದರೆ ಇಲ್ಲೊಂದು ದೇವಸ್ಥಾನದ ದೇವರ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜಾಗಿದೆ!!

ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರಸಿದ್ಧ ಶ್ರೀ ಮಾರುತಿ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ಇರಿಸಿದ್ದ ಹಣ್ಣುಕಾಯಿ ಪ್ರಸಾದವು ಬರೋಬ್ಬರಿ 2.50 ಲಕ್ಷಕ್ಕೆ ಹರಾಜು ಮಾಡಲಾಗಿದ್ದು, ಕಾರವಾರ ನಗರದ ಬ್ರಾಹ್ಮಣ ಗಲ್ಲಿಯ ಮಾರುತಿ ದಾಮೋದರ್ ಸ್ವಾರ್ ಎಂಬ ವ್ಯಾಪಾರಿಯು ಹರಾಜಿನಲ್ಲಿ ಪ್ರಸಾದವನ್ನು ಪಡೆದುಕೊಂಡಿದ್ದಾರೆ.

ಪ್ರತಿ ವರ್ಷ ಜನವರಿಯಲ್ಲಿ ಕಾರವಾರದ ಶ್ರೀ ಮಾರಿತಿ ದೇವಸ್ಥಾನದ ಜಾತ್ರಾಮಹೊತ್ಸವ ಹಾಗೂ ಪಲ್ಲಕ್ಕಿ ಉತ್ಸವ ನೆಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಾರುತಿ ದೇವರಿಗೆ ಇರಿಸುವ ಹಣ್ಣುಕಾಯಿ ಹಾಗೂ ಪುಷ್ಪಗಳನ್ನೊಳಗೊಂಡ ತಟ್ಟೆಯನ್ನು ಭಕ್ತರ ಎದುರು ಹರಾಜು ಹಾಕಲಾಗುತ್ತದೆ.

ಈ ಬಾರಿ ಸಹ ಈ ಹರಾಜಿನಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಹೀಗಾಗಿ ದೇವರ ಪ್ರಸಾದಕ್ಕೆ ಭಕ್ತರಲ್ಲಿ ಪೈಪೋಟಿಯ ಹರಾಜು ಪ್ರಕ್ರಿಯೆ ನಡೆದು ಕೊನೆಯಲ್ಲಿ 2.50 ಲಕ್ಷಕ್ಕೆ ಹರಾಜು ಮುಕ್ತಾಯವಾಯಿತು.

Leave A Reply

Your email address will not be published.