ಕೊಲ್ಲೂರು: ಎಳ್ಳಮಾವಾಸ್ಯೆಪ್ರಯುಕ್ತ ಗೋವಿಂದ ತೀರ್ಥದಲ್ಲಿ ಅಮಾವಾಸ್ಯೆ ತೀರ್ಥ ಸ್ನಾನ!! ಕೇಮಾರು ಶ್ರೀ ಗಳ ದಿವ್ಯ ಉಪಸ್ಥಿತಿ-ಸಹಸ್ರಾರು ಭಕ್ತರು ಭಾಗಿ

ಕೊಲ್ಲೂರು: ಇಲ್ಲಿನ ಕೊಡಚಾದ್ರಿ ಬೆಟ್ಟದಲ್ಲಿರುವ ಗೋವಿಂದತೀರ್ಥ(ಬೆಳ್ಕಲ್ ತೀರ್ಥ) ದಲ್ಲಿ ನಿನ್ನೆ ಎಳ್ಳುಅಮಾವಾಸ್ಯೆಯ ಪ್ರಯುಕ್ತ ತೀರ್ಥ ಸ್ನಾನ ನಡೆಯಿತು. ಈ ಪುಣ್ಯ ತೀರ್ಥ ಸ್ನಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಾವಿರಾರು ಭಕ್ತರು ಪ್ರಕೃತಿಯ ಸೌಂದರ್ಯ ಸವಿಯುತ್ತ ಸುಮಾರು 5 ಕಿಮೀ ಕಾಡಿನೊಳಗೆ ಕ್ರಮಿಸಿ, ಗೋವಿಂದ ತೀರ್ಥದಲ್ಲಿ ತೀರ್ಥ ಮಿಂದು ಪುನೀತರಾದರು.

ಈ ಸಂದರ್ಭದಲ್ಲಿ ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್ ನ ಸದಸ್ಯರು, ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ವಿಶ್ವ ಹಿಂದೂ ಪರಿಷತ್ ಮುಖಂಡರು, ಕಾರ್ಯಕರ್ತರು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

Leave A Reply

Your email address will not be published.