ಟಾರ್ಗೆಟ್ ಹಿಂದುತ್ವ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಿಂದೂಗಳಿಗೆ ಭಾರೀ ಅನ್ಯಾಯ!! ತುಳುನಾಡಿನ ಕಾರ್ಣಿಕದ ಗುಳಿಗ ಹಾಗೂ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ರ ಅವಹೇಳನ!!

ಹಿಂದೂಗಳ ದೈವ ಗುಳಿಗ ಹಾಗೂ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ನ್ನು ಅವಹೇಳನ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಜನ ಹೆಚ್ಚಾಗಿ ಉಪಯೋಗಿಸುವ ಇನ್ಸ್ಟಾಗ್ರಾಮ್ ಜಾಲತಾಣದಲ್ಲಿ ತುಳುನಾಡಿನ ಕಾರ್ಣಿಕ ದೈವ ಗುಳಿಗನ ಕೋಲದ ವೀಡಿಯೋ ಹಾಕಿ ವಿಕೃತವಾಗಿ ಚಿತ್ರೀಕರಿಸಲಾಗಿದೆ. ಅದಲ್ಲದೇ ಹತ್ತು ಬಿಯರ್ ಬಾಟಲ್ ಹಾಗೂ ಕೈಯ್ಯಲ್ಲಿ ಹಿಸುಕುವ ಬಜಿಲ್ ಬೆಲ್ಲ ಎಂಬಂತೆಲ್ಲ ಬರೆಯಲಾಗಿದೆ.

ಇನ್ನೊಂದೆಡೆ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ರ ಪ್ರತಿಮೆಗೆ ಮೂತ್ರಹೊಯ್ಯುವ ಹಾಗೂ ಹಂದಿ-ನಾಯಿಗಳು ಮೂಸಿ ನೋಡುವ ರೀತಿಯಲ್ಲಿ ಎಡಿಟ್ ಮಾಡಲಾಗಿದೆ.ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹುಡುಗಿಯರು ತುಂಬಾ ಕ್ಯೂಟ್ ಎಂಬತೆಲ್ಲಾ ವಿಕಾರವಾಗಿ ಬರೆಯಲಾಗಿದೆ. ಟಾರ್ಗೆಟ್ ಹಿಂದುತ್ವ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಇಂತಹ ಪೋಸ್ಟ್ ಗಳು ಕಂಡುಬಂದಿದ್ದು ಹಿಂದೂಗಳು ಆಕ್ರೋಶಿತರಾಗಿದ್ದಾರೆ.

Leave A Reply

Your email address will not be published.