ಪುಣ್ಚತ್ತಾರು : ಕೆರೆಗೆ ಬಿದ್ದು ಯುವಕ ಸಾವು,ಮೃತ ದೇಹ ಪತ್ತೆ

ಕಡಬ : ಕಾಣಿಯೂರು ಸಮೀಪದ ಪುಣ್ಚತ್ತಾರು ಎಂಬಲ್ಲಿ ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್ (29) ತನ್ನ ಕೃಷಿ ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ಕೆರೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರ ತಂದೆ ಸುಂದರ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಮೃತರು ತಂದೆ ಸುಂದರ ಪೂಜಾರಿ, ತಾಯಿ ಪ್ರೇಮಲತಾ, ಸಹೋದರ ಗಿರೀಶ್ ರವರನ್ನು ಅಗಲಿದ್ದಾರೆ.

ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ

ಪುಣ್ಚತ್ತಾರು ಬೆಂಗಡ್ಕ ಎಂಬಲ್ಲಿ ವ್ಯಕ್ತಿಯೋರ್ವರ ಚಪ್ಪಲಿ ಕೆರೆಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಕೆರೆಗೆ ಬಿದ್ದಿರುವ ಶಂಕೆಯಲ್ಲಿ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಇನ್ಸ್
ಪೆಕ್ಟರ್ ಆಂಜನೇಯ ರೆಡ್ಡಿ ನೀಡಿದ್ದಾರೆ.

Leave A Reply

Your email address will not be published.