ಬೆಳ್ತಂಗಡಿ: ಗುರುವಾಯನಕೆರೆ ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ

ಗುರುವಾಯನಕೆರೆಯ ಪಿಲಿಚಂಡಿಕಲ್ಲು ಸಮೀಪದ ಬಿ.ಬಿ.ಎಸ್ ಸ್ಕ್ರಾಪ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಡೆದಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ ಅಗ್ನಿಶಾಮಕದಳ ಸಿಬ್ಬಂದಿ, ಮುಂದಾಗಲಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಉಸ್ಮಾನ್, ವಿಜಯಕುಮಾರ್ ಹಿರೇಮಠ,ಮಾರುತಿ ಟಿ ಆರ್,ಚಾಲಕ ಲಿಂಗರಾಜ್ ಲಮಾಣಿ ಪಾಲ್ಗೊಂಡಿದ್ದರು.

Leave A Reply

Your email address will not be published.