ಭಾರತ ಯಾವಾಗಲೂ ಹಿಂದೂಗಳ ದೇಶ- ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ : ಭಾರತವು ಯಾವಾಗಲೂ ಹಿಂದೂಗಳ ದೇಶವೇ ಹೊರತು,ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ಹಣದುಬ್ಬರದ ವಿರುದ್ಧದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಭಾರತ ಹಿಂದೂಗಳ ದೇಶ.ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ.ದೇಶದಲ್ಲಿ ಹಣದುಬ್ಬರವಿದ್ದು, ಸಂಕಷ್ಟ ಎದುರಾಗಿದ್ದರೆ ಅದನ್ನು ಮಾಡಿದ್ದು ಹಿಂದುತ್ವ ವಾದಿಗಳು.ನಾನು ಹಿಂದೂ ಆದರೆ ಹಿಂದುತ್ವವಾದಿಯಲ್ಲ ಎಂದರು.
ಮೋದಿಜಿ ಮತ್ತು ಅವರ ಮೂರ್ನಾಲ್ಕು ಕೈಗಾರಿಕೋದ್ಯಮಿ ಸ್ನೇಹಿತರು ಏಳು ವರ್ಷಗಳಲ್ಲಿ ದೇಶವನ್ನು ಹಾಳುಮಾಡಿದ್ದಾರೆ” ಎಂದು ರಾಹುಲ್ ಇದೇ ವೇಳೆ ಆರೋಪಿಸಿದರು.