ಪುತ್ತೂರು: ಗಾಯಗೊಂಡು ರೈಲ್ವೆ ಹಳಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿ!! ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ

ಪುತ್ತೂರು: ಇಲ್ಲಿನ ನೇರಳಕಟ್ಟೆ-ಬಂಟ್ವಾಳ ರೈಲು ನಿಲ್ದಾಣದ ಬಾಯಿಲ ಗ್ರಾಮದ ರೈಲ್ವೇ ಹಳಿಯ ಪಕ್ಕದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಅಪರಿಚಿತರೊಬ್ಬರು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜ್ಞಾಹೀನವಾಗಿ ಕಂಡುಬಂದಿರುವ ವ್ಯಕ್ತಿಗೆ ಸುಮಾರು 40 ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು,ವಾರಿಸುದಾರರು ಇದ್ದಲ್ಲಿ ರೈಲ್ವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ರೈಲ್ವೇ ಪೊಲೀಸ್ ಮನವಿ ಮಾಡಿದೆ.

Leave A Reply

Your email address will not be published.