ಬೆಳ್ತಂಗಡಿ : ನದಿಗೆ ಸ್ನಾನಕ್ಕೆ ತೆರಳಿದ್ದ ಗುರುದೇವ ಕಾಲೇಜಿನ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ :ಇಬ್ಬರು ಗೆಳೆಯರು ಸ್ನಾನ ಮಾಡಲು ಹಿಂದೂ ರುದ್ರ ಭೂಮಿ ಸಮೀಪವಿರುವ ಸೋಮಾವತಿ ನದಿಗೆ ತೆರಳಿದ್ದು,ಓರ್ವ ವಿದ್ಯಾರ್ಥಿ ಕಾಲು ಜಾರಿ ನೀರುಪಾಲಾಗಿರುವ ಘಟನೆ ಹಳೆ ರಸ್ತೆವನ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮೂಲತಃ ಚಿಕ್ಕಮಗಳೂರು ಮೂಲದ ನಿವಾಸಿ ಸಮರ್ಥ್(18) ಸಾವನ್ನಪ್ಪಿದ ವಿದ್ಯಾರ್ಥಿ.

ಚಿಕ್ಕಮಗಳೂರು ನಿವಾಸಿಯಾಗಿರುವ ಸಮರ್ಥ್ ಬೆಳ್ತಂಗಡಿ ಸುದೆಮುಗೇರು ಸಂಜಯ ನಗರದ ಬಳಿ ಪಿಜಿಯಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಮಧ್ಯಾಹ್ನದ ನಂತರ ಕಾಲೇಜ್ ಇದ್ದ ಕಾರಣ ಇನ್ನೊಬ್ಬ ಗೆಳೆಯನ ಜೊತೆ ಸ್ನಾನ ಮಾಡಲು ತೆರಳಿದ್ದಾನೆ.ಗೆಳೆಯ ಪಕ್ಕದಲ್ಲಿ ಇದ್ದು ಸಮರ್ಥ್ ಮಾತ್ರ ನೀರಿಗಿಳಿದ್ದಾನೆ.ಏಕಾಏಕಿ ನಾಪತ್ತೆಯಾದಾಗ ಬೊಬ್ಬೆ ಹೊಡೆದು ಸ್ಥಳೀಯರಿಗೆ ಮಾಹಿತಿ ನೀಡಿದ್ದು,ನಂತರ ಸ್ಥಳೀಯರ ಸಹಕಾರದಿಂದ ಶವ ಮೇಲೆ ತೆಗೆದು ಬೆಳ್ತಂಗಡಿ ಶವಗಾರದಲ್ಲಿ ಇರಿಸಲಾಗಿದೆ.

ಈ ಸುದ್ದಿ ತಿಳಿದ ಶ್ರೀ ಗುರುದೇವ ಕಾಲೇಜಿನ ಅಧ್ಯಕ್ಷ ಹಾಗೂ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಆಸ್ಪತ್ರೆಗೆ ಬಂದು ಮುಂದಿನ ಕ್ರಮದ ಬಗ್ಗೆ ಸಹಕರಿಸಿದ್ದು,ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.