ಉಪ್ಪಿನಂಗಡಿ: ನಿನ್ನೆ ನಡೆದ ಮಾರಕಾಸ್ತ್ರ ದಾಳಿಗೆ ಪ್ರತಿಕಾರದ ಇನ್ನೊಂದು ದಾಳಿ!! ಇಂದು ಸಂಜೆ ವೇಳೆ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನಿಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!!

ಉಪ್ಪಿನಂಗಡಿ :ನಿನ್ನೆ ನಡೆದ ಮಾರಕಾಸ್ತ್ರ ದಾಳಿಯ ಆರೋಪಿಗಳ ಬಂಧನವಾಗುವ ಮುನ್ನವೇ ಇನ್ನೊಂದು ಪ್ರಕರಣ ನಡೆದಿದ್ದು, ಮೀನಿನ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದ ಪರಿಣಾಮ ಯುವಕನ ಸ್ಥಿತಿ ಗಂಭೀರವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಸಮೀಪದ ಹಳೇ ಗೇಟು ಎಂಬಲ್ಲಿ ಯುವಕನೊಬ್ಬನ ಮೇಲೆ ದಾಳಿ ನಡೆದಿದ್ದು,ಹಲ್ಲೆಗೊಳಗಾದವರು ಉಪ್ಪಿನಂಗಡಿ ಕಜೆಕಾರು ನಿವಾಸಿ ಅಶೋಕ್ ಶೆಟ್ಟಿ ಎನ್ನಲಾಗಿದೆ.

ಉಪ್ಪಿನಂಗಡಿಯ ಹಳೇ ಗೇಟು ಬಳಿ ಮೀನಿನ ವ್ಯಾಪಾರ ನಡೆಸುವ ಇವರು ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ. ಗಾಯಾಳು ಆಶೋಕ್ ಅವರಿಗೆ ಗಂಭೀರವಾಗಿ ಗಾಯಾವಾಗಿದ್ದು ಅವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಮುಸುಕುಧಾರಿಗಳ ತಂಡ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಅಂಗಡಿ ಬಳಿ ನಿಂತಿದ್ದ ಆಶೋಕ್ ಮೇಲೆ ಏರಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಚೂರಿಯಲ್ಲಿ ಇರಿದಿದೆ. ಬಳಿಕ ಮುಸುಕಧಾರಿಗಳ ತಂಡ ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.