ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವದಂದು ಈ ಬಾರಿಯೂ ಎಡೆಸ್ನಾನವಿಲ್ಲ !! | ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಡೆಸ್ನಾನ ಸೇವೆ ರದ್ದು

ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವದಂದು ಭಕ್ತರು ನಡೆಸುವ ಎಡೆಸ್ನಾನ ಸೇವೆ ಈ ಬಾರಿಯೂ ನಡೆಯುವುದಿಲ್ಲ. ಕೊರೋನಾ ಕಾರಣದಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿಯಂದು ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ಈ ಸೇವೆ ನಡೆಸುತ್ತಿದ್ದರು. ಕಳೆದ ಬಾರಿಯೂ ಕೊರೋನ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಅಂತೆಯೇ ಈ ಬಾರಿಯೂ ಎಡೆ ಸ್ನಾನಕ್ಕೆ ಅವಕಾಶ ನೀಡಲಾಗಿಲ್ಲ.

Leave A Reply

Your email address will not be published.