ಕಡಬ : ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯ ಶವ ಪತ್ತೆ | ಮೃತದೇಹದ ಮೇಲೆ ಬೆಂಕಿಯ ಗುಳ್ಳೆಗಳು

ಕಡಬ : ಪೇಟೆಯಲ್ಲಿರುವ ಪಾಳು ಬಿದ್ದ ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತದೇಹದಲ್ಲಿ ಬೆಂಕಿ ತಾಗಿದ ಗುಳ್ಳೆಗಳು ಕಾಣುತ್ತಿದ್ದು,ವ್ಯಕ್ತಿ ಮಲಗಿದ್ದ ಚಾಪೆಯೂ ಬೆಂಕಿಯಿಂದ ಕರಟಿದ ರೀತಿಯಲ್ಲಿ ಇದೆ.ಆದರೂ ಪ್ರವಾಸಿ ಬಂಗಲೆಗೆ ಬೀಗ ಹಾಕಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ.

ಈ ವ್ಯಕ್ತಿಯನ್ನು ಉಳಿಪ್ಪು ನಿವಾಸಿ ಮೊನಚ್ಚೋನ್ ಎಂದು ಗುರುತಿಸಲಾಗಿದ್ದು, ಪಾಳುಬಿದ್ದ ಬಂಗಲೇಯಲ್ಲಿ ಈ ವ್ಯಕ್ತಿ ವಾಸವಾಗಿದ್ದರು ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

ಕಳೆದ ಆಗಸ್ಟ್ ನಲ್ಲಿ ಪಾಳು ಬಿದ್ದ ಬಂಗಲೆಯ ಕುರಿತಾಗಿ ಹೊಸಕನ್ನಡ ವಿಸ್ತೃತ ವರದಿ ಮಾಡಿತ್ತು..ಅದರ ಲಿಂಕ್ ಇಲ್ಲಿದೆ

ಶಿಥಿಲಾವಸ್ಥೆಗೆ ತಲುಪಿ ಮುರಿದು ಬೀಳುವ ಹಂತದಲ್ಲಿರುವ ಮುತ್ತಜ್ಜ ಇನ್ನಾದರೂ ಕಡಬದ ಪ್ರವಾಸಿ ಬಂಗಲೆ ತೆರವುಗೊಳಿಸುವಲ್ಲಿ ಗಮನಹರಿಸುವರೇ ಅಧಿಕಾರಿಗಳು

Leave A Reply

Your email address will not be published.