ಬೆಳ್ತಂಗಡಿ:ವೇಣೂರಿನ ಗೋಳಿಯಂಗಡಿ ಬಳಿ ಓಮಿನಿ ಮತ್ತು ಬೈಕ್ ನಡುವೆ ಅಪಘಾತ|ಬೈಕ್ ಸವಾರ ಗಂಭೀರ

ಬೆಳ್ತಂಗಡಿ : ವೇಣೂರಿನ ಗೋಲಿಯಂಗಡಿ ಎಂಬಲ್ಲಿ ಇದೀಗ ಓಮಿನಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು,ಬೈಕ್ ಸವಾರ ಮೂಡಬಿದ್ರೆಯಿಂದ ಪಡಂಗಡಿ ಬರುವ ವೇಳೆ,ಓಮಿನಿ ಬೆಳ್ತಂಗಡಿಯಿಂದ ವೇಣೂರಿಗೆ ಚಲಿಸುವಾಗ ಈ ಘಟನೆ ಸಂಭವಿಸಿದೆ.

ಬೈಕ್ ಸವಾರ ಗೋಲಿಯಂಗಡಿ ನಿವಾಸಿ ಆನಂದ್ ಅವರ ಪುತ್ರ ಅಂಕಿತ್(23) ಇವರು ತೀವ್ರ ಗಾಯಗೊಂಡಿದ್ದು,ಇವರನ್ನು ಬೆಳ್ತಂಗಡಿಯ ಅಭಯ ಆಸ್ಪತ್ರೆಗೆ ಚಿಕೆತ್ಸೆಗೆ ಕರೆತರಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

Leave A Reply

Your email address will not be published.