ಹಣ ಪಣಕ್ಕಿಟ್ಟು ಜೂಜಾಟ ,ಎಎಸ್ಪಿ ನೇತೃತ್ವದಲ್ಲಿ ದಾಳಿ,8 ಮಂದಿ ಬಂಧನ

ಬಂಟ್ವಾಳ : ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೋಡಿ‌ ಎಂಬಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಎಎಸ್ ಪಿ ಶಿವಾಂಷು ರಜಪೂತ್ ರವರು ಹಾಗೂ ತಂಡ ದಾಳಿ‌ಮಾಡಿದ್ದು, 8 ಮಂದಿಯನ್ನು ಬಂಧಿಸಿದ್ಧಾರೆ.

ಬಂಧಿತರಿಂದ ಜೂಜಾಟಕ್ಕೆ ಬಳಸಿರುವ ಹಣ, ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಎಎಸ್ ಪಿ ರವರ ನೇತೃತ್ವದ ತಂಡ‌ ಹಾಗೂ ಬಂಟ್ವಾಳ‌ ನಗರ
ಠಾಣಾ ಪೋಲಿಸರು ಕಾರ್ಯಾಚರಣೆಯಲ್ಲಿ‌ ಭಾಗವಹಿಸಿದ್ದರು.

Leave A Reply

Your email address will not be published.