ಉಪ್ಪಿನಂಗಡಿ : ಫಾಸ್ಟ್‌ಪುಡ್ ವಿಚಾರದಲ್ಲಿ ತಗಾದೆ ,ಅಂಗಡಿ ಮಾಲಕನಿಗೆ ಹಲ್ಲೆಗೈದ ಅಪರಿಚಿತ ತಂಡ

ಉಪ್ಪಿನಂಗಡಿ: ಫಾಸ್ಟ್ ಫುಡ್ ಅಂಗಡಿಯ ಮಾಲೀಕನಿಗೆ ಅಪರಿಚಿತ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನ.17ರಂದು ರಾತ್ರಿ ನಡೆದಿದೆ.

ಆದರ್ಶ ನಗರದ ಬಾತೀಶ ಎಂಬವರು ಉಪ್ಪಿನಂಗಡಿ ಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ನಿನ್ನೆ ರಾತ್ರಿ ಇನೋವಾ ಹಾಗೂ ರಿಡ್ಜ್ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರ ತಂಡವೊಂದು ಆಹಾರದ ವಿಷಯದಲ್ಲಿ ತಗಾದೆ ತೆಗೆದಿದ್ದು ಬಾತೀಶ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.