ನೆಲ್ಯಾಡಿಯಲ್ಲಿ ಮತ್ತೆ ಕಳ್ಳತನ | ಗುಜರಿ ಅಂಗಡಿಗೆ ನುಗ್ಗಿದ ಕಳ್ಳರು

ನೆಲ್ಯಾಡಿ : ವಾರದ ಹಿಂದಷ್ಟೇ ಸರಣಿ ಕಳ್ಳತನ ನಡೆದಿದ್ದ ನೆಲ್ಯಾಡಿಯಲ್ಲಿ ಮತ್ತೆ ಕಳ್ಳತನ ನಡೆದಿದೆ.

ನಿನ್ನೆ ತಡರಾತ್ರಿ ನೆಲ್ಯಾಡಿಯಲ್ಲಿರುವ ಗುಜರಿ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಸೊತ್ತು ಕಳವು ಮಾಡಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಸ್ಥಳಕ್ಕಾಗಮಿಸಿದ ವೇಳೆ ಪಿಕಪ್ ವಾಹನದಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.