ಸುಬ್ರಹ್ಮಣ್ಯ : ಹಾಲು ಸಾಗಾಟದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಹೊಳೆಗೆ ಪಲ್ಟಿ| ಹೊಳೆಯಲ್ಲಿ ತೇಲಿ ಹೋದ ಹಾಲಿನ ಕ್ಯಾನ್ ಗಳು

ಸುಬ್ರಹ್ಮಣ್ಯ: ಹಾಲು ಸಾಗಾಟಕ್ಕೆ ತೆರಳುತ್ತಿದ್ದ ಪಿಕಪ್ ವಾಹನ ಕಲ್ಮಕಾರಿನಲ್ಲಿ ನಿಯಂತ್ರಣ ತಪ್ಪಿ ಹೊಳೆಗೆ
ಪಲ್ಟಿಯಾದ ಘಟನೆ ಸಂಭವಿಸಿದೆ.

ಪಿಕಪ್ ನಲ್ಲಿದ್ದ ಪಂಜ ಸಮೀಪದ ಚೈತ್ರ ಪ್ರಸಾದ್ ಮತ್ತು ಗಣೇಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ.

ಕಲ್ಮಕಾರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಸಾಗಾಟ ಮಾಡಲು ಈ ವಾಹನ ಬರುತ್ತಿದ್ದು,ಪಲ್ಟಿಯಾದ ವೇಳೆ ಹೊಳೆಯಲ್ಲಿ ತೇಲಿ ಹೋದ ಹಾಲಿನ ಕ್ಯಾನ್ ಗಳು ಕೆಲವು ನಾಪತ್ತೆಯಾಗಿದೆ.

Leave A Reply

Your email address will not be published.