ಗುಂಡ್ಯ ಹೊಳೆಯಲ್ಲಿ ಸೆಲ್ಫಿ ತೆಗೆಯುವಾಗ ಆಯತಪ್ಪಿ ಯುವಕ ನೀರುಪಾಲು

ಕಡಬ : ಗುಂಡ್ಯ ಹೊಳೆಯಲ್ಲಿ ಸೆಲ್ಫಿ ತೆಗೆಯುವಾಗ ಆಯತಪ್ಪಿ ಯುವಕ ನೀರುಪಾಲಾದ ಘಟನೆ ನಡೆದಿದೆ.

ಕಣ್ಮರೆಯಾದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್​ ಎಂದು ಗುರುತಿಸಲಾಗಿದೆ.

ಆಟೋಮೊಬೈಲ್​ ಬಿಡಿಭಾಗಗಳ ಸಾಗಾಟ ಮಾಡುವ ರಾಜಸ್ಥಾನದ ಮೂಲದ ಯುವಕರಿಬ್ಬರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗುಂಡ್ಯ ಹೊಳೆಗೆ ಇಳಿದಿದ್ದಾರೆ. ಒಬ್ಬ ನೀರಿನಲ್ಲಿ ಆಟವಾಡುತ್ತಾ ಬಂಡೆಯ ಮೇಲೆ ನಿಂತಿರುತ್ತಾನೆ. ಈ ವೇಳೆ ಇನ್ನೊಬ್ಬ ಮೊಬೈಲ್​ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಾ ಅವನ ಪಕ್ಕ ಬರುತ್ತಾನೆ. ಈ ವೇಳೆ ಸೆಲ್ಫಿ ವಿಡಿಯೋ ಮಾಡುತ್ತಿರುವಾಗ ಯುವಕನೊಬ್ಬ ಆಯತಪ್ಪಿ ನೀರಿಗೆ ಬೀಳುತ್ತಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಷಯ ತಿಳಿದ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಪತ್ತೆಗಾಗಿ ನದಿಯಲ್ಲಿ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗಿಲ್ಲ.ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಲೇ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

Leave A Reply

Your email address will not be published.