ಡಿಕೇಶಿ ಅವರ ಡಿಎನ್ಎ ಟೆಸ್ಟ್ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದು ಯಾಕೆ ?

ಬಾಗಲಕೋಟೆ: ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಡಿಕೆಶಿ ಅವರ ಡಿಎನ್‌ಎ ಟೆಸ್ಟ್ ಮಾಡಬೇಕು ಎಂದು ಹಿಂದುತ್ವ ನಾಯಕ ಪ್ರಮೋದ್ ಮುತಾಲಿಕ್ ವ್ಯಂಗ್ಯವಾಡಿದ್ದಾರೆ.

ಇದೀಗ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಒಲಿಸಿಕೊಳ್ಳಲು  ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ 100 ಮೀಟರ್ಸ್ ಓಟದ ಸ್ಪರ್ಧೆ ಇರೋದು ಜಗತ್ತಿಗೇ ಗೊತ್ತಿರುವ ವಿಚಾರ. ಹೇಗಾದರೂ ನಾಯಕಿಯ ಮನ ಗೆಲ್ಲುವ ಮಹದಾಸೆ ಇಬ್ಬರಿಗೂ. ಅದರಲ್ಲಿ ಮುಂಚೂಣಿ ಕಾಯ್ದುಕೊಲ್ಲಳು ಡಿಕೆಶಿ ಈಗ ತಯ್ಯಾರ್ !!

ಸೋನಿಯಾ ಗಾಂಧಿ ಅವರ ವಿಶ್ವಾಸ ಬೆಳೆಸಿಕೊಳ್ಳಲು ಅವರು 52 ಅಡಿ ಎತ್ತರದ ಕ್ರೈಸ್ತ ಧರ್ಮದ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ. ಓಟಿಗಾಗಿ ಅಲ್ಲ, ಯಾರನ್ನೋ ಓಲೈಸಿಕೊಳ್ಳಲು ಇಂತಹ ಕಾರ್ಯ ಮಾಡುತ್ತಿದ್ದಾರೆ. ದೇಶ ಉಳಿದರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗುತ್ತಾರೆ. ಇಲ್ಲವಾದಲ್ಲಿ ಎಲ್ಲಿ ಇರುತ್ತಾರೆ ? ಎಂದು ಮುತಾಲಿಕ್ ಅವರು ಡಿಕೇಶಿಯ ಉದ್ದನೆಯ ಮೂಗೆಳೆದಿದ್ದಾರೆ.

ರಾಜ್ಯದಲ್ಲಿ ಮತಾಂತರದ ಹಾವಳಿ ವಿಪರೀತವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಭೇಟಿಯಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Leave A Reply

Your email address will not be published.