ಖ್ಯಾತ ನಟ ದಿ || ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗಾನ ನಮನ ಕಾರ್ಯಕ್ರಮ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಸಂಗೀತ ತರಬೇತಿ ಕೇಂದ್ರ ಸುಳ್ಯ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ವಿಧಿವಶರಾದ ದಿ|| ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗಾನ ನಮನ ಕಾರ್ಯಕ್ರಮವು ನೆರವೇರಿತು .

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ ಎಚ್ . ಭೀಮರಾವ್ ವಾಷ್ಠರ್ ರವರು ತಮ್ಮ ನುಡಿನಮನ ಭಾಷಣದಲ್ಲಿ ಅಗಲಿದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಬಾಲ್ಯ ಜೀವನ , ಚಲನ ಚಿತ್ರ ಬದುಕು , ಅವರ ಗಾಯನ , ಪ್ರಶಸ್ತಿ , ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು . ಸಪ್ತಸ್ವರ ಸಂಗೀತ ತರಬೇತಿ ಕೇಂದ್ರದ ವ್ಯವಸ್ಥಾಪಕರಾದ ಅರುಣ್ ರಾವ್ ಜಾಧವ್ ರವರು ಪುಷ್ಪನಮನ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು .

ಗಾಯಕರಾದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತು ರವಿಚಂದ್ರ ಕೊಡಿಯಾಲ್ ಬೈಲು ರವರು ಉಪಸ್ಥಿತರಿದ್ದರು . ಮೌನ ಪ್ರಾರ್ಥನೆ ಮಾಡಿ.ನಂತರ ಪುಷ್ಪಾರ್ಚನೆ ಮಾಡಿದ ಗಾಯಕರಾದ ಸಾಯಿ ಪ್ರಶಾಂತ್ , ಪೃಥ್ವಿರಾಜ್ ಪೆರ್ಲಂಪಾಡಿ , ಅಶ್ವಿಜ್ ಅತ್ರೇಯ , ಮನ್ವಿತಾ ಬೆಳ್ಳಾರೆ , ಹರ್ಷಿತಾ ಕೆ ಎಸ್ , ದಯಾನಂದ್ ದೇಲಂಪಾಡಿ , ಹರಿಪ್ರಸಾದ್ ಪಿ , ಸುನೀಶ್ ಕಾಸರಗೋಡು ಮತ್ತು ಇನ್ನಿತರರು ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಹಾಡಿ ಗಾನನಮನ ಸಲ್ಲಿಸಿದರು .

Leave A Reply

Your email address will not be published.