ಬೆಳ್ತಂಗಡಿ | ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮಂಡಲ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿದೆ ಭಜನೆ ಸ್ಪರ್ಧೆ | ಗೆದ್ದ ಭಜನಾ ತಂಡಕ್ಕೆ ಸಿಗಲಿದೆ 5 ಲಕ್ಷ ರೂ. ಬಂಪರ್ ಬಹುಮಾನ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮಂಡಲ(ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ) ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಇದರ ನೇತೃತ್ವದಲ್ಲಿ, “ಭಜನೆ” ಭಗವಂತನಿಗೆ ಭಕ್ತಿಯ ಸಮರ್ಪಣೆ, ಎಂಬ ವಿನೂತನ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ತಾಲೂಕಿನ ಹೆಚ್ಚಿನ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿನಂತಿಸಿಕೊಳ್ಳಲಾಗಿದೆ.

ಶಾಸಕ ಹರೀಶ್ ಪೂಂಜಾ ಇವರ ಮುತುವರ್ಜಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ತಂಡಕ್ಕೆ 5 ಲಕ್ಷ , ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 2.5 ಲಕ್ಷ ಹಾಗೂ ಉತ್ತಮ ಪ್ರದರ್ಶನ ನೀಡಿದ ಐದು ತಂಡಗಳಿಗೆ ತಲಾ ಒಂದೊಂದು ಲಕ್ಷ ಭರ್ಜರಿ ಬಹುಮಾನ ಕೂಡ ಘೋಷಣೆಯಾಗಿದೆ. ಸ್ಪರ್ಧೆಯಲ್ಲಿ ಭಜನಾ ತಂಡವನ್ನು ನೋಂದಾವಣೆಗೊಳಿಸಲು ನವೆಂಬರ್ 1 ರಿಂದ ಡಿಸೆಂಬರ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಸೂಚನೆಗಳು ಇಂತಿವೆ:

*ಪುರುಷರ ಕುಣಿತ ಭಜನೆ ತಂಡದಲ್ಲಿ ಕನಿಷ್ಠ 12 ಜನ ಪಾಲ್ಗೊಳ್ಳುವುದು

*ಮಹಿಳೆಯರ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಜನ ಸ್ಪರ್ಧಿಗಳು ಭಾಗಹಿಸುವುದು

*15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಸಂಖ್ಯೆ ಇರತಕ್ಕದ್ದು

*ತಾಳ ಹಾಗೂ ತಮ್ಕಿಯನ್ನು ಹೊರತುಪಡಿಸಿ ಇನ್ನಿತರ ಯಾವುದೇ ಸಂಗೀತ ಪರಿಕರಗಳನ್ನು ಕೂಡ ಬಳಸುವಂತಿಲ್ಲ.

*ಒಂದು ಮಂಡಳಿಯು 60 ನಿಮಿಷಗಳ ಪ್ರದರ್ಶನ ನೀಡುವುದು.(ಕುಣಿತ ಭಜನೆ 20ನಿಮಿಷ, ಮಹಿಳೆಯರ ಕುಳಿತು ಭಜನೆ 20ನಿಮಿಷ ಮತ್ತು 15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನೆ 20 ನಿಮಿಷ )

*ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಭಜನಾ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದು

*ಭಜನಾ ಮಂಡಳಿಯ ಸ್ವಚ್ಛತೆ ಮತ್ತು ಅಲಂಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು

*ದಾಸರ ಪದಗಳಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗುವುದು

*ಭಾಗವಹಿಸುವ ಮಂಡಳಿಯು ಮೂರು ವಿಭಾಗಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸುವುದು

ಜನವರಿ 1ನೇ ತಾರೀಖಿನ ನಂತರ ಆಯೋಜಕರ ಸೂಚನೆಯಂತೆ ಸ್ಪರ್ಧೆ ಆರಂಭಗೊಳ್ಳಲಿದೆ. ಆಯೋಜಕರ ಹಾಗೂ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. 9632863443 ಈ ಸಂಖ್ಯೆಗೆ ಕರೆ ಮಾಡಿ ಭಜನಾ ತಂಡದ ನೋಂದಾವಣೆ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಹ ಕಾರ್ಯದರ್ಶಿ, 9741036849 ಹಾಗೂ ಮಂಜುನಾಥ ಶೆಟ್ಟಿ ನಿಡಿಗಲ್, ನಿಕಟಪೂರ್ವ ಅಧ್ಯಕ್ಷರು, ಭಜನಾ ಪರಿಷತ್, ಬೆಳ್ತಂಗಡಿ, 9448060940 ಇವರನ್ನು ಸಂಪರ್ಕಿಸಬಹುದು.

Leave A Reply

Your email address will not be published.