ಪಾನಿಪುರಿಯಲ್ಲಿ ತೇಲುತ್ತಿದ್ದವು ರಾಶಿ ರಾಶಿ ಹುಳಗಳು!! | ರೊಚ್ಚಿಗೆದ್ದ ಸ್ಥಳೀಯರಿಂದ ಪಾನಿಪುರಿ ವ್ಯಾಪಾರಸ್ಥರ ಮೇಲೆ ಹಿಗ್ಗಾಮುಗ್ಗ ಥಳಿತ

ಪಾನಿಪುರಿಯಲ್ಲಿ ಹುಳಗಳು ಪತ್ತೆಯಾದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸ್ಥಳೀಯ ಯುವಕರು ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ.

ಪಾನಿಪುರಿ ಅಂಗಡಿಯಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ಪರಿಶೀಲನೆ ನಡೆಸಿದ್ದು, ಮಡಿಕೆ ಪಾನಿಪೂರಿ (ಗೋಲ್ಗಪ್ಪ) ಜೊತೆಗೆ ಹುಳಗಳು ಕಂಡು ಬಂದಿವೆ. ಸರಿಯಾಗಿ ಪರಿಶೀಲಿಸಿದಾಗ ಕೊಳೆತ ಆಲೂಗೆಡ್ಡೆಗಳೂ ಕೂಡ ಪತ್ತೆಯಾಗಿವೆ.

ಈ ವೇಳೆ ರೊಚ್ಚಿಗೆದ್ದ ಯುವಕರು ವ್ಯಾಪಾರಸ್ಥರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿಸಿರುವ ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಫುಲ್ ವೈರಲ್ ಆಗುತ್ತಿದೆ.

Leave A Reply

Your email address will not be published.