ವಿಟ್ಲ | ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ, ಬಿರುಕುಬಿಟ್ಟ ಮನೆಯ ಗೋಡೆ, ಲಕ್ಷಾಂತರ ರೂ. ನಷ್ಟ

ವಿಟ್ಲ : ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡದ್ದಲ್ಲದೇ ಮನೆಗೆ ಹಾನಿಯಾದ ಘಟನೆ ಅಳಿಕೆ ಗ್ರಾಮದಲ್ಲಿ ಸಂಭವಿಸಿದೆ.

ಅಳಿಕೆ ಗ್ರಾಮದ ಕಲ್ಲೆಂಚಿನಪಾದೆ ಶೀನ ನಳಿಕೆ ಅವರ ಮನೆಗೆ ರಾತ್ರಿ ಭಾರೀ ಪ್ರಮಾಣದಲ್ಲಿ ಸಿಡಿಲು ಬಡಿದಿದೆ. ಇದರಿಂದ ಶೀನ ನಳಿಕೆ ಅವರ ಪತ್ನಿ ಸುಶೀಲ, ಮಕ್ಕಳಾದ ವಿದ್ಯಾ ಮತ್ತು ವಿನಯ ಅವರು ಗಾಯಗೊಂಡಿದ್ದಾರೆ.

ಮನೆಯ ಗೋಡೆಯನ್ನು ಸೀಳಿಕೊಂಡು ಸಿಡಿಲು ಪ್ರವೇಶಿಸಿದ್ದರಿಂದ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ವಿದ್ಯುತ್ ವೈಯರಿಂಗ್, ವಿವಿಧ ಉಪಕರಣಗಳು ಸುಟ್ಟುಹೋಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷ ಚಂದ್ರಶೇಖರ ಯು, ವಿ ಎ ಸತೀಶ್ ಸುವರ್ಣ ಹಾಗೂ ಸಹಾಯಕ ಜಗನ್ನಾಥ ಭೇಟಿ ನೀಡಿದ್ದಾರೆ.

1 Comment
  1. 69hub.pl says

    Wow, marvelous blog structure! How long have you been running a blog
    for? you made running a blog glance easy. The whole glance of your web site
    is magnificent, let alone the content material!
    You can see similar here sklep online

Leave A Reply

Your email address will not be published.