ಕ್ರಿಕೆಟ್ ಬೆಟ್ಟಿಂಗ್ ಗಾಗಿ ಲಕ್ಷಾಂತರ ರೂ. ಸಾಲ ಮಾಡಿ ತೀರಿಸಲಾಗದೆ ನದಿಗೆ ಹಾರಿದ ಯುವ ವ್ಯಾಪಾರಿ

ಇಂದಿನ ಯುವ ಪೀಳಿಗೆ ಅಂತೂ ಕ್ರೀಡಾ ಪ್ರಿಯರು. ಅದರಲಂತೂ ಕ್ರಿಕೆಟ್ ಹಲವು ಕ್ರೀಡಾರ್ಥಿಗಳ ಜೀವವೇ ಸರಿ. ಇದೇ ರೀತಿ ಕ್ರಿಕೆಟ್ ಮೇಲೆ ಅಭಿಮಾನಿಯಾಗಿದ್ದ ವ್ಯಕ್ತಿ ಕ್ರಿಕೆಟ್ ಬೆಟ್ಟಿಂಗ್ ‌ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೌದು.ಕ್ರಿಕೆಟ್ ಬೆಟ್ಟಿಂಗ್ ಭೂತ ಬಾಗಲಕೋಟೆಗೂ ಕಾಲಿಟ್ಟಿದ್ದು , ಕ್ರಿಕೆಟ್ ಬೆಟ್ಟಿಂಗ್ ‌ ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ , ಅದನ್ನು ತೀರಿಸಲಾಗದೆ ಯುವ ವ್ಯಾಪಾರಿಯೊಬ್ಬರು ನದಿಗೆ ಹಾರಿರುವ ಘಟನೆ ನೆಡೆದಿದೆ.ಸೈಯದ್ ವಾಳದ ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ನಿವಾಸಿಯಾಗಿದ್ದಾರೆ.

ಸೈಯದ್ ವಾಳದ ನದಿಗೆ ಹಾರಿದ ಹಣ್ಣಿನ ಯುವವ್ಯಾಪಾರಿಯಾಗಿದ್ದು,ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಾರಿದ್ದಾನೆ . ಘಟಪ್ರಭಾ ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರಿಂದ ಹುಡುಕಾಟ ಆರಂಭಿಸಲಾಗಿದೆ .

Leave A Reply

Your email address will not be published.