ಮಂಗಳೂರು ಅಂಚೆ ಇಲಾಖೆಯಲ್ಲಿ ಗ್ರಾಮೀಣ ಭಾಗದ ಪ್ರತಿನಿಧಿ ಹುದ್ದೆಗೆ ಅರ್ಜಿ ಆಹ್ವಾನ!! ಅರ್ಜಿ ಸಲ್ಲಿಸಲು ಅಕ್ಟೋಬರ್ 07 ಕೊನೆಯ ದಿನ

ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಗ್ರಾಮೀಣ ವ್ಯಾಪ್ತಿಗಳ ಅಂಚೆ ಇಲಾಖೆಯಲ್ಲಿ ಎಜೇಂಟ್ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಜೀವ ವಿಮೆಯ ಪ್ರತಿನಿಧಿ ಹುದ್ದೆ ಇದಾಗಿದ್ದು, ಉತ್ತಮ ಆದಾಯ ಗಳಿಸಲು ಅರ್ಹರಿಗೊಂದು ಸುವರ್ಣವಕಾಶವಾಗಿದೆ.

ಅಭ್ಯರ್ಥಿಯು ಕನಿಷ್ಠ 18 ವರ್ಷ ದಿಂದ ಗರಿಷ್ಟ 50 ವರ್ಷದವರಾಗಿದ್ದು, ಕನಿಷ್ಠ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದವರಾಗಿರಬೇಕು.ಸ್ವ ಉದ್ಯೋಗ ದ ಜೊತೆಗೆ ಅರೆಕಾಲಿಕ, ಅಥವಾ ಪೂರ್ಣಕಾಲಿಕ ವಾಗಿಯೂ ಈ ಉದ್ಯೋಗ ನಡೆಸಬಹುದಾಗಿದ್ದು ಅಭ್ಯರ್ಥಿಗಳು ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 07 ಕೊನೆಯ ದಿನವಾಗಿದೆ.

ಗೂಗಲ್ ಫಾರ್ಮ್ ಭರ್ತಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ :

http://bit.ly/3iPV3ts

Leave A Reply

Your email address will not be published.