ಬೆಂಗಳೂರು ಬಸ್ಸಿನಲ್ಲಿಯುವತಿಗೆ ಮುತ್ತು ಕೊಟ್ಟ ಯುವಕನ ಬಂಧನ

ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ್ದ ಬಳ್ಳಾರಿಯ ಇಂಜಿನಿಯರ್​ ಬಂಧನ.

ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ ಬಳ್ಳಾರಿ ಮೂಲದ ಎಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬಾಗಲ ಗುಂಟೆ ಪೊಲೀಸರು ಬಂಧಿಸಿದ್ದಾರೆ.

ಗೌರಿ-ಗಣೇಶ ಹಬ್ಬ ಮುಗಿಸಿ ಯುವತಿ ವಾಪಸ್ ತನ್ನೂರಿನಿಂದ ಬೆಂಗಳೂರಿಗೆ ಬರುವಾಗ ಈ ಘಟನೆ ನಡೆದಿತ್ತು. ಬಳ್ಳಾರಿಯಿಂದ ಕೆಎಸ್ಆರ್​ಟಿಸಿ (KSRTC) ಸ್ಲೀಪರ್ ಬಸ್ಸಿನಲ್ಲಿ ಯುವಕ-ಯುವತಿ ಪ್ರಯಾಣ ಮಾಡಿದ್ದು, ಬೆಳಿಗ್ಗೆ 5 ಗಂಟೆಗೆ ಯುವಕ, ಯುವತಿಗೆ ಮುತ್ತು ಕೊಟ್ಟಿದ್ದಾನೆ. ಘಟನೆ ನಡೆದ ಬಳಿಕ ಯುವತಿ ಕಿರುಚಾಟ ನಡೆಸಿದ್ದು, ಭಯದಲ್ಲಿ ಮಧುಸೂದನ್ ರೆಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಮಧುಸೂದನ್ ರೆಡ್ಡಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿರುವ ಬಗ್ಗೆ ಯುವಕ ಮಾಹಿತಿ ನೀಡಿದ್ದಾನೆ.

Leave A Reply

Your email address will not be published.