ಬೀಚ್ ನಲ್ಲಿ ಧ್ಯಾನದ ಪೋಸ್ ನೀಡಲು ಹೋಗಿ ಸಮುದ್ರ ಪಾಲಾದ ವಕೀಲ | ಪ್ರಾಣಕ್ಕೆ ಕುತ್ತು ತಂದಿತು ಅಪಾಯಕಾರಿ ಫೋಟೋಶೂಟ್ !

ಸಮುದ್ರ ದಂಡೆಯಲ್ಲಿ ಫೋಟೋಗೆ ಧ್ಯಾನ ಮಾಡುವ ರೀತಿಯಲ್ಲಿ ಪೋಸ್ ಕೊಡುವ ದುಸ್ಸಾಹಸವನ್ನು ಮಾಡಲು ಹೋಗಿ ಕುಮಟಾದ ವಕೀಲನೊಬ್ಬ ಸಮುದ್ರ ಪಾಲಾದ ಘಟನೆ ನಡೆದಿದೆ.

ಕುಮಟಾದ ವನ್ನಳ್ಳಿ ಬೀಚ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿರಸಿಯ ಸುಬ್ರಹ್ಮಣ್ಯ ಗೌಡ ಎನ್ನುವವರು ಜೀವ ಕಳೆದುಕೊಂಡಿದ್ದಾರೆ. ಇವರು ಸ್ನೇಹಿತರ ಜೊತೆಗೂಡಿ ವನ್ನಳ್ಳಿ ಬೀಚ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಫೋಟೋ ತೆಗೆಸಿಕೊಂಡಿದ್ದಾರೆ.

ಸಮುದ್ರದ ನಡುವೆ ಇರುವ ಬಂಡೆಯೊಂದರ ಮೇಲೆ ಕುಳಿತು ಧ್ಯಾನಾಸಕ್ತರಾಗಿರುವಂತೆ ಪೋಸ್ ಕೊಟ್ಟು ಅದರ ಫೋಟೋ ತೆಗೆಯಲು ಹೇಳಿದ್ದಾರೆ. ಇತ್ತ ಸ್ನೇಹಿತರು ಫೋಟೋ ತೆಗೆಯುತ್ತಿರುವಾಗಲೇ ಬೃಹತ್ ಅಲೆಗಳು ಬಂದು ಅಪ್ಪಳಿಸಿದೆ. ಅಲೆಗಳ ಹೊಡೆತಕ್ಕೆ ಅಲ್ಲಿಯೇ ಸುಬ್ರಹ್ಮಣ್ಯ ಗೌಡ ಅವರು ಆಯತಪ್ಪಿಗೆ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.