ಬೆಳ್ತಂಗಡಿ|ವಿಪರೀತ ಮಳೆಗೆ ಅಂಚೆ ಕಛೇರಿಯ ಗೋಡೆ ಕುಸಿತ|ಅಗತ್ಯ ದಾಖಲೆಗಳು ಮಣ್ಣಿನಡಿಗೆ ಬಿದ್ದು ಹಾನಿ!!

ಬೆಳ್ತಂಗಡಿ :ವಿಪರೀತ ಮಳೆಯಿಂದಾಗಿ ತೋಟತ್ತಾಡಿಯ ಅಂಚೆ ಕಛೇರಿಯ ಹಿಂಬಾಗದ ಗೋಡೆ ಕುಸಿದಿದ್ದು ಅಪಾರ ಹಾನಿಯಾಗಿದೆ.

ಸೆ.14 ರಂದು ರಾತ್ರಿ ವೇಳೆ ಈ ಘಟನೆ ಸಂಭವಿಸಿದೆ.ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದೆ.

ಅಂಚೆ ಪಾಲಕಿ ರೋಸ್ಥಿರವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಈ ಘಟನೆ ನಡೆದಿದ್ದರಿಂದ, ಪಾಲಕಿ ಇದರಿಂದ ತಪ್ಪಿಸಿಕೊಂಡಿದ್ದಾರೆ.

ಹಳೆ ಮಣ್ಣಿನಿಂದ ನಿರ್ಮಿಸಿದ ಇಟ್ಟಿಗೆಯ ಗೋಡೆ ಹಾಗು ಹೆಂಚಿನ ಛಾವಣಿಯ ಕಟ್ಟಡವಾದ್ದರಿಂದ,ನೀರಿನ ತೇವಾಂಶ ತಾಗಿ ಗೋಡೆ ಕುಸಿದಿರಬಹುದು ಎನ್ನಲಾಗಿದೆ.

ಗೋಡೆ ಕುಸಿತದಿಂದಾಗಿ ಕಛೇರಿಯೊಳಗೆ ಮಣ್ಣಿನ ರಾಶಿ ಬಿದ್ದು, ಅಗತ್ಯ ದಾಖಲೆಗಳು ಮಣ್ಣಿನಡಿಗೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.