ಕಡಬ : ನಾನ್ ಸಿಆರ್ ಝೆಡ್ ಮರಳುಗಾರಿಕೆ ಕುರಿತು ಈಗಾಗಲೇ ಕೋರ್ಟ್ ನಲ್ಲಿ ಮರಳುಗಾರಿಕೆ ಪರವಾಗಿ ಆದೇಶ ಬಂದಿದೆ.
ಈ ಕುರಿತು ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್ ಅವರೊಂದಿಗೆ ಮರಳುಗಾರಿಕೆ ಆರಂಭಿಸುವ ಕುರಿತು ಮಾತುಕತೆ ನಡೆಸಲಾಯಿತು.
ಮರಳುಗಾರಿಕೆ ನಡೆಸುವ ಕುರಿತು ಮರಳುಗಾರರ ಪರವಾಗಿ ದ.ಕ. ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆದು ಮತ್ತು ಸಂಘದ ಸದಸ್ಯರಾದ ಸುರೇಶ್ ಕುಂಡಡ್ಕ ಅವರು ಮಾತುಕತೆ ನಡೆಸಿದರು.