ಕಡಬ : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾದ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆ

ಕಡಬ ಸೆ 1 : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾಗಿರುವ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಶಫೀಕ್(19) ನೀರುಪಾಲಾದ ಯುವಕ. ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ನೀರಿನಲ್ಲಿ ಕಣ್ಮರೆಯಾಗಿದ್ದನು.ಸತತ ಹುಡುಕಾಟದ ಬಳಿಕ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಕೆಳಗೆ ಗುರುವಾರ ಪತ್ತೆಯಾಯಿತು.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಸ್ಥಳೀಯ ಈಜುಗಾರರು, ಯುವಕರು ಶಫೀಕ್ ಗಾಗಿ ಹುಡುಕಾಟ ನಡೆಸಿದರು.

Leave A Reply

Your email address will not be published.